
ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಜ್ಯೋತಿಷ್ಯದ ಆಧಾರದಲ್ಲಿ ಫಲಿತಾಂಶದ ವಿಶ್ಲೇಷಣೆಯನ್ನು ಮಾಡಲಾಗಿದೆ. ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ನುಡಿದಿರುವ ಭವಿಷ್ಯ ಇಲ್ಲಿದೆ.

ಭಾರತ ದೇಶದ ಅಭಿವೃದ್ಧಿಯ ವಿಷಯದಲ್ಲಿ ಮುಂದಿನ ಎರಡು ವರ್ಷ ಬಹಳ ಪ್ರಮುಖವಾಗಿರುತ್ತದೆ ಹಾಗೂ ಅದಕ್ಕಿರುವ ಜ್ಯೋತಿಷ್ಯ ಕಾರಣಗಳು ಇವು ಎಂದು ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ವಿಶ್ಲೇಷಣೆ ಮಾಡಿದ್ದಾರೆ.

ಫೆಬ್ರವರಿ 15ನೇ ತಾರೀಕು ಮೀನ ರಾಶಿಗೆ ಶುಕ್ರ ಗ್ರಹದ ಪ್ರವೇಶ ಆಗಲಿದೆ. ಅಲ್ಲಿಂದ ಮಾರ್ಚ್ 12ರ ತನಕ ಅದೇ ರಾಶಿಯಲ್ಲಿ ಶುಕ್ರ ಸಂಚಾರವಿದೆ. ಗುರು- ಶುಕ್ರರು ಮೀನ ರಾಶಿಯಲ್ಲಿ ಇರುವುದರಿಂದ ಒಂದು ಗ್ರಹಕ್ಕೆ ಸ್ವಕ್ಷೇತ್ರವಾದರೆ, ಮತ್ತೊಂದಕ್ಕೆ ಉಚ್ಚ ಕ್ಷೇತ್ರ ಆಗುತ್ತದೆ. ಈ ಅವಧಿಯಲ್ಲಿ ಮಿಥುನ, ಕನ್ಯಾ, ಧನು, ಮೀನ ಲಗ್ನದಲ್ಲಿ ಜನಿಸುವಂಥ ಮಕ್ಕಳಿಗೆ ಗುರುವಿನಿಂದಾಗಿ ಹಂಸ ಯೋಗ, ಶುಕ್ರನಿಂದ ಮಾಲವ್ಯ ಯೋಗ ಆಗುತ್ತದೆ (ಪಂಚ ಮಹಾಪುರುಷ ಯೋಗ). ಈ ಗುರು- ಶುಕ್ರ ಯುತಿ (ಒಟ್ಟಿಗಿರುವುದು) ಯಾವ ರೀತಿಯ ಫಲವನ್ನು ನೀಡುತ್ತದೆ ಎಂಬ ಬಗ್ಗೆ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಹನ್ನೆರಡೂ ರಾಶಿಗಳಿಗೆ ಭವಿಷ್ಯ ನುಡಿದಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಪಾಕಿಸ್ತಾನ, ಅಫ್ಗಾನಿಸ್ತಾನದಲ್ಲಿ ಮಹಾನ್ ವಿಪತ್ತು ಸಂಭವಿಸಲಿದೆ ಎಂದು ಕರ್ನಾಟಕದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಭವಿಷ್ಯ ನುಡಿದಿದ್ದಾರೆ. ಇಂಥ ಸನ್ನಿವೇಶಕ್ಕೆ ಯಾವ ಗ್ರಹಸ್ಥಿತಿ ಕಾರಣ ಆಗಬಹುದು ಎಂಬುದನ್ನು ವಿವರಿಸಿದ್ದಾರೆ.

ಬಾಲ ಮಾರ್ಕಂಡೇಯ ಹೋಮ ಎಂಬುದು ಐದು ವರ್ಷದೊಳಗಿನ ಮಕ್ಕಳಿಗೆ ಪ್ರತಿ ವರ್ಷ ಮಾಡಿಸಬೇಕಾದದ್ದು. ಇದರ ಫಲವೇನು, ಎಲ್ಲಿ ಮಾಡಿಸಬೇಕು ಇತ್ಯಾದಿ ವಿವರಗಳು ಈ ಲೇಖನದಲ್ಲಿ ತಿಳಿಸಲಾಗಿದೆ.

2023ನೇ ಇಸವಿಯ ಫೆಬ್ರವರಿ ತಿಂಗಳ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಮಾಸ ಭವಿಷ್ಯ ನೀಡಲಾಗಿದೆ. ಎಲ್ಲಿ ಅಗತ್ಯ ಇದೆಯೋ ಅಲ್ಲಿ ಮುಂಜಾಗ್ರತೆಯನ್ನು ತೆಗೆದುಕೊಳ್ಳಿ. ಗ್ರಹ ಸ್ಥಿತಿ ಹಾಗೂ ಅದರ ಫಲಾಫಲ ಇಲ್ಲಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿ ಕೆರೆ ತೊಂಡನೂರು ಎಂಬ ಕ್ಷೇತ್ರ ಇದೆ. ಇಲ್ಲಿರುವ ಕೃತ ಯುಗದಲ್ಲಿ ಪ್ರಹ್ಲಾದರಿಂದ ಪ್ರತಿಷ್ಠಾಪಿಸಲಾದ ಯೋಗ ನರಸಿಂಹ ದೇವರು, ನಂಬಿ ನಾರಾಯಣ ಹಾಗೂ ಧರ್ಮರಾಯನಿಂದ ಪ್ರತಿಷ್ಠಾಪಿಸಲಾದ ಪಾರ್ಥಸಾರಥಿಯನ್ನು ಒಮ್ಮೆಯಾದರೂ ನೋಡಬೇಕು. ಇಲ್ಲಿ ಕೆಲವು ಸೇವೆ ತುಂಬ ವಿಶಿಷ್ಟ. ಆ ಬಗ್ಗೆ ಕೂಡ ಈ ಲೇಖನದಲ್ಲಿ ಮಾಹಿತಿ ಇದೆ.

ಉಪನಯನವನ್ನು ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಈ ಮೂರೂ ವರ್ಣದವರಿಗೆ ಮಾಡಲಾಗುತ್ತದೆ. ಇಂಥ ಉಪನಯನಕ್ಕೆ ಸೂಕ್ತ ವಯಸ್ಸು ಯಾವುದು, ಗುರು ಬಲ ಇಲ್ಲದಿದ್ದಲ್ಲಿ ಏನು ಮಾಡಬೇಕು, ಯಾವ ತಿಥಿ, ವಾರ ಹಾಗೂ ನಕ್ಷತ್ರ ಉತ್ತಮ ಎಂಬಿತ್ಯಾದಿ ವಿವರಗಳು ಈ ಲೇಖನದಲ್ಲಿವೆ.

ಯಾವುದೇ ರಾಶಿಯ ಹನ್ನೆರಡನೇ ಮನೆ, ಜನ್ಮ ರಾಶಿ ಹಾಗೂ ಎರಡನೇ ಮನೆಯಲ್ಲಿ ಶನಿ ಸಂಚಾರ ಮಾಡುವ ವೇಳೆಯನ್ನು ಸಾಡೇ ಸಾತ್ ಅಥವಾ ಏಳರಾಟ ಶನಿ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ ಏಳು ಎಚ್ಚರಿಕೆಗಳನ್ನು ಇಲ್ಲಿ ನೀಡಲಾಗಿದೆ.

ದೇವರನ್ನು ಪ್ರತ್ಯಕ್ಷ ಕಂಡವರ ಭಾವನೆಗಳ ಅಭಿವ್ಯಕ್ತಿಯೇ ರುದ್ರಪ್ರಶ್ನ. ಇದು ಗದ್ಯರೂಪದ ವೇದಮಂತ್ರವಾಗಿದ್ದರೂ ಪಾರಾಯಣ ಮಾಡುವಾಗ ಒಮ್ಮೊಮ್ಮೆ ಭಾವಗೀತೆ ಎನ್ನಿಸುವುದು ಉಂಟು. ರುದ್ರಸೂಕ್ತ ಎಂಬ ಮತ್ತೊಂದು ಭಾಗವಿದ್ದರೂ, ರುದ್ರಪ್ರಶ್ನವನ್ನೂ
© 2026 All rights reserved