ಮಂತ್ರಾಲಯವು ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವಕ್ಕೆ ಸಜ್ಜಾಗಿದೆ. ಈ ಮಹೋತ್ಸವವು ಆಗಸ್ಟ್ 27 ರಿಂದ ಸೆಪ್ಟೆಂಬರ್ 02, 2026 ರವರೆಗೆ ನಡೆಯಲಿದ್ದು, ಭಕ್ತರಿಗೆ ವಿಶೇಷ ಪೂಜೆ ಮತ್ತು ಸೇವೆಗಳಲ್ಲಿ ಪಾಲ್ಗೊಳ್ಳಲು ಇದು ಅಪೂರ್ವ ಅವಕಾಶವಾಗಿದೆ.
ಆರಾಧನಾ ಮಹೋತ್ಸವದ ವೈಶಿಷ್ಟ್ಯಗಳು
ಈ ಆರಾಧನಾ ಮಹೋತ್ಸವದಲ್ಲಿ ಅನ್ನದಾನ, ಅಲಂಕಾರ, ರಥೋತ್ಸವ ಮತ್ತು ವಿವಿಧ ವಿಶೇಷ ಸೇವೆಗಳನ್ನು ಆಯೋಜಿಸಲಾಗಿದೆ. ಭಕ್ತರು ಅಧಿಕೃತ ಜಾಲತಾಣದ ಮೂಲಕ ಈ ಸೇವೆಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು ಮತ್ತು ಡಿಜಿಟಲ್ ರಶೀದಿಯನ್ನು ಪಡೆಯಬಹುದು.
ಲಭ್ಯವಿರುವ ಪ್ರಮುಖ ಸೇವೆಗಳು
ಭಕ್ತರು ತಮ್ಮ ಇಚ್ಛೆಯಂತೆ ವಿವಿಧ ಸೇವೆಗಳನ್ನು ಆರಿಸಿಕೊಳ್ಳಬಹುದು:
- ಸಂಪೂರ್ಣ ಆರಾಧನಾ ಅನ್ನದಾನ ಸೇವೆ (3 ದಿನಗಳು): ₹ 10,00,000
- ಒಂದು ದಿನದ ಆರಾಧನಾ ಅನ್ನದಾನ ಸೇವೆ: ₹ 3,00,000
- ವಿಶೇಷ ಫಲಪಂಚಾಮೃತ ಸೇವೆ: ₹ 25,000
- ಸಾಮೂಹಿಕ ಮಹಾ ರಥೋತ್ಸವ ಸೇವೆ (ಉತ್ತರಾರಾಧನೆ): ₹ 2,000
- ಸಾಮೂಹಿಕ ಆರಾಧನಾ ಅನ್ನದಾನ ಸೇವೆ: ₹ 2,000
- ಸಾಮೂಹಿಕ ಆರಾಧನಾ ಪುಷ್ಪಾಲಂಕಾರ ಸೇವೆ: ₹ 2,000
- ಸಾಮೂಹಿಕ ಹಸ್ತೋದಕ ಸಹಿತ ಅನ್ನದಾನ: ₹ 1,000
- ಮಧ್ಯಾರಾಧನಾ ಸಾಮೂಹಿಕ ವಿಶೇಷ ಫಲಪಂಚಾಮೃತ ಸೇವೆ: ₹500 (ಸೂಚನೆ: ಭಕ್ತರು ಯಾವುದೇ ಮೊತ್ತವನ್ನು ಆರಾಧನಾ ದಾನವಾಗಿ ನೀಡಲು ಅವಕಾಶವಿರುತ್ತದೆ.)
ಮಂತ್ರಾಲಯ ಪ್ರಭು ರಾಘವೇಂದ್ರ ಸ್ವಾಮಿಗಳು ಜನಿಸಿದ ಪುಣ್ಯಭೂಮಿ ಭುವನಗಿರಿ: ಈ ಕ್ಷೇತ್ರದ ವಿಶೇಷತೆಗಳೇನು?
ಗಮನಿಸಬೇಕಾದ ಪ್ರಮುಖ ಅಂಶಗಳು
- ನೋಂದಣಿ: ಸೇವೆಗಳನ್ನು ಆನ್ಲೈನ್ ಮೂಲಕ ಮಾತ್ರ ಕಾಯ್ದಿರಿಸಬೇಕು.
- ಭಾಷೆ: ಭಕ್ತರ ವಿವರಗಳು ಮತ್ತು ವಿಳಾಸವನ್ನು ಕಡ್ಡಾಯವಾಗಿ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಮೂದಿಸಬೇಕು.
- ಪ್ರಸಾದ: ಪ್ರಸಾದವನ್ನು ಭಾರತದ ವಿಳಾಸಗಳಿಗೆ ಮಾತ್ರ ಕಳುಹಿಸಲಾಗುತ್ತದೆ.
- ಸಹಾಯವಾಣಿ: ಯಾವುದೇ ತಾಂತ್ರಿಕ ಸಮಸ್ಯೆಗಳು ಅಥವಾ ಪಾವತಿ ಸಂಬಂಧಿತ ಪ್ರಶ್ನೆಗಳಿದ್ದಲ್ಲಿ onlineservices@srsmatha.org ಗೆ ಇಮೇಲ್ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ಮತ್ತು ಸೇವೆಗಳನ್ನು ಬುಕ್ ಮಾಡಲು ಮಠದ ಅಧಿಕೃತ ಜಾಲತಾಣವಾದ srsmatha.org ಅನ್ನು ಸಂಪರ್ಕಿಸಿ.
ರಾಯರ ವರ್ಧಂತಿ ವಿಶೇಷ: ಕಷ್ಟಗಳನ್ನು ನೀಗಿಸುವ ಶ್ರೀ ರಾಘವೇಂದ್ರ ಸ್ತೋತ್ರದ ಮಹತ್ವ ನಿಮಗೆ ಗೊತ್ತೇ?
ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವು ಪ್ರತಿ ವರ್ಷ ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಿತೀಯ (ಪೂರ್ವಾರಾಧನೆ), ತೃತೀಯ (ಮಧ್ಯಾರಾಧನೆ) ಹಾಗೂ ಚತುರ್ಥಿ (ಉತ್ತರಾರಾಧನೆ) ನಡೆಯುತ್ತದೆ. ಈ ವರ್ಷ ಆಗಸ್ಟ್ 29, 30 ಹಾಗೂ 31ನೇ ತಾರೀಕಿನಂದು ನಡೆಯುತ್ತದೆ.
ಲೇಖನ- ಶ್ರೀನಿವಾಸ ಮಠ









