ಆರ್ಆರ್ ನಗರ ಶಿರಡಿ ಸಾಯಿ ಬಾಬ ಮಂದಿರದಲ್ಲಿ ಗಣೇಶ ಚತುರ್ಥಿ ವಿಶೇಷ: ಮೂರು ಕಾಯಿ ಅಷ್ಟ ದ್ರವ್ಯ ಹೋಮ, ಹೂವಿನ ಸೇವೆ

Ganesha Chaturthi special ashtadravya Ganapati Homa at Shirdi sai baba temple RR Nagar
ಗಣೇಶ ಚತುರ್ಥಿಗಾಗಿ ಮೂರು ಕಾಯಿ ಅಷ್ಟದ್ರವ್ಯ ಗಣಪತಿ ವಿಶೇಷ ಹೋಮ

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ಈ ವಿಶೇಷ ದಿನದಂದು ಸಮಸ್ತ ಭಕ್ತರ ಪಾಲಿಗೆ ಅತ್ಯಂತ ಮಂಗಳಕರವಾದ ಗಣೇಶ ಚತುರ್ಥಿಯ ಸಂಭ್ರಮ. ಈ ಬಾರಿ ಸೆಪ್ಟೆಂಬರ್ 14ನೇ ತಾರೀಕು ಬಂದಿದೆ. ವಿಘ್ನಗಳನ್ನು ನಿವಾರಿಸುವ, ಬುದ್ಧಿವೃದ್ಧಿಯನ್ನು ಕರುಣಿಸುವ ಪ್ರಥಮ ಪೂಜಿತ ಗಣಪತಿಯ ವಿಶೇಷ ಆರಾಧನೆಯ ಈ ಶುಭ ಸಂದರ್ಭದಲ್ಲಿ, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಪ್ರಸಿದ್ಧ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಮೂರು ಕಾಯಿ ಅಷ್ಟ ದ್ರವ್ಯ ಹೋಮ ಹಾಗೂ ಹೂವಿನ ಸೇವೆ 

ಆರ್.ಆರ್. ನಗರದ ಶಿರಡಿ ಸಾಯಿ ಬಾಬ ಮಂದಿರದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಮೂರು ಕಾಯಿ ಅಷ್ಟ ದ್ರವ್ಯ ಹೋಮವನ್ನು ಆಯೋಜಿಸಲಾಗಿದೆ. ಜತೆಗೆ ಸೇವಾಕರ್ತರಿಗೆ ಹೂವಿನ ಸೇವೆ ಸಲ್ಲಿಸುವ ಅವಕಾಶ ಸಹ ಇದೆ. ಈ ವಿಶೇಷ ಸಂದರ್ಭದಲ್ಲಿ ವಿಘ್ನಹರ್ತನಾದ ಗಣಪತಿಗೆ ಗಣಪತಿ ಹೋಮವನ್ನು ಮಾಡಿಸುವುದರಿಂದ ಭಕ್ತರಿಗೆ ಅತ್ಯುನ್ನತವಾದ ಮತ್ತು ವಿಶೇಷವಾದ ಫಲಗಳು ಪ್ರಾಪ್ತಿಯಾಗಲಿವೆ.

ಈ ಪವಿತ್ರ ಸೇವೆಯ ವಿವರಗಳು ಹೀಗಿವೆ:

  • ಸೇವೆಯ ಮೊತ್ತ: ಈ ವಿಶೇಷ ಸೇವೆಗೆ ರೂ. 5,001/- ನಿಗದಿಪಡಿಸಲಾಗಿದೆ.
  • ಮೂರು ಕಾಯಿ ಅಷ್ಟದ್ರವ್ಯ ಹೋಮ: ಈ ಸೇವೆ ಅಡಿಯಲ್ಲಿ ಮೂರು ಕಾಯಿ ಅಷ್ಟದ್ರವ್ಯ ಹೋಮವನ್ನು ಮಾಡಲಾಗುತ್ತದೆ, ಸೇವಾಕರ್ತರ ವಿಶೇಷ ಸಂಕಲ್ಪವನ್ನು ತೆಗೆದುಕೊಳ್ಳಲಾಗುವುದು.
  • ವಿಶೇಷ ಹೂವಿನ ಸೇವೆ: ಇದರೊಂದಿಗೆ ದೇವರಿಗೆ ಅತ್ಯಂತ ಪ್ರಿಯವಾದ ಹೂವುಗಳಿಂದ ವಿಶೇಷ ಹೂವಿನ ಸೇವೆಯನ್ನು ನೆರವೇರಿಸಲಾಗುತ್ತದೆ.

ಕುರುಡುಮಲೆ ಗಣಪತಿ ದೇವಸ್ಥಾನದ ಸಾಲಿಗ್ರಾಮ ಶಿಲೆ ಮೂರ್ತಿಯ ಪವಾಡ ನಿಮಗೆ ಗೊತ್ತೆ?

ಹೋಮದಿಂದ ಪ್ರಾಪ್ತಿಯಾಗುವ ಶುಭ ಫಲಗಳು

ಈ ಅಷ್ಟದ್ರವ್ಯ ಗಣಪತಿ ಹೋಮ ಹಾಗೂ ಹೂವಿನ ಸೇವೆಯಲ್ಲಿ ಪಾಲ್ಗೊಳ್ಳುವುದರಿಂದ ಭಕ್ತರ ಜೀವನದ ವಿವಿಧ ಸಮಸ್ಯೆಗಳು ನಿವಾರಣೆಯಾಗಿ, ಸರ್ವ ಕಾರ್ಯಗಳಲ್ಲೂ ಜಯ ಸಿಗಲಿದೆ:

  • ವಿವಾಹ ವಿಘ್ನಗಳ ನಿವಾರಣೆ: ಮದುವೆಯಲ್ಲಿ ಎದುರಾಗುತ್ತಿರುವ ಅನಗತ್ಯ ತಡೆಗಳು ಹಾಗೂ ವಿಳಂಬಗಳು ನಿವಾರಣೆಯಾಗಿ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲು ದಾರಿಯಾಗುತ್ತದೆ.
  • ವಿದ್ಯಾಭ್ಯಾಸದ ಅಡೆತಡೆಗಳ ನಿವಾರಣೆ: ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗಿ, ವಿದ್ಯಾಭ್ಯಾಸದಲ್ಲಿ ಬರುವ ಎಲ್ಲ ರೀತಿಯ ಅಡೆತಡೆಗಳು ದೂರವಾಗಿ ಉಜ್ವಲ ಭವಿಷ್ಯ ರೂಪುಗೊಳ್ಳುತ್ತದೆ.
  • ವ್ಯಾಪಾರ-ವ್ಯವಹಾರಗಳಲ್ಲಿ ಯಶಸ್ಸು: ಹೊಸ ಉದ್ಯಮಗಳನ್ನು ಆರಂಭಿಸುವವರಿಗೆ ಅಥವಾ ಈಗಾಗಲೇ ವ್ಯಾಪಾರದಲ್ಲಿ ತೊಡಗಿರುವವರಿಗೆ ಆರ್ಥಿಕ ಅಭಿವೃದ್ಧಿ, ಲಾಭ ಹಾಗೂ ಯಶಸ್ಸು ಲಭಿಸುತ್ತದೆ.
  • ಕೇತು ದೋಷ ನಿವಾರಣೆ: ಜಾತಕದಲ್ಲಿರುವ ಕೇತು ದೋಷದ ಪ್ರಭಾವಗಳು ತಗ್ಗಿ, ಇದರಿಂದ ಉಂಟಾಗುವ ಮಾನಸಿಕ ಹಾಗೂ ದೈಹಿಕ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.
  • ಸರ್ವ ಇಷ್ಟಾರ್ಥ ಸಿದ್ಧಿ: ಭಕ್ತರ ಮನಸ್ಸಿನ ಕೋರಿಕೆಗಳು ಈಡೇರಿ, ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.

ನಾಳೆ ಈ ಪವಿತ್ರ ಸೇವೆಯಲ್ಲಿ ಪಾಲ್ಗೊಂಡು ವಿಘ್ನರಾಜನ ಕೃವೆಗೆ ಪಾತ್ರರಾಗಿ, ನಿಮ್ಮ ಜೀವನದ ಸಕಲ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಿ. ಗಣಪತಿಯ ಹಾಗೂ ಸಾಯಿ ಬಾಬಾ ಅವರ ಕೃಪೆ ನಿಮ್ಮೆಲ್ಲರ ಮೇಲಿರಲಿ.

ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಲು ಹಾಗೂ ಸೇವೆಗೆ ಕಾಣಿಕೆ ನೀಡಲು 9980 300790 ಹಾಗೂ 91106 16295 ಈ ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಿ ಎಂದು ನರಸಿಂಹ ದೇವರ ಉಪಾಸಕರೂ ಆದ  ಮಂಜುನಾಥ್ ಎನ್ ಭಾರದ್ವಾಜ್ ಅವರು ತಿಳಿಸಿದ್ದಾರೆ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts