ಜ್ಯೋತಿಷ್ಯ ಕಲಿಕೆಗೆ ಉಪಯುಕ್ತ ಪುಸ್ತಕ, ಸಂಸ್ಥೆಯ ಪರಿಚಯ ಇಲ್ಲಿದೆ

⁠A close-up photograph of the vibrant orange cover of a Kannada astrology book titled 'Jyotishya Udaya Deepika' by K. Prakash Rao. The cover features a central illustration of Lord Surya in a seven-horse chariot, flanked by oil lamps, with details of the author's title and the publisher at the bottom. The book stands vertically on a wooden desk with a blurred library background.
"ಜ್ಯೋತಿಷ್ಯ ಉದಯ ದೀಪಿಕಾ" - ಕೆ. ಪ್ರಕಾಶ್ ರಾವ್ ಅವರ ಜ್ಯೋತಿಷ್ಯ ಶಾಸ್ತ್ರ ಪುಸ್ತಕದ ಮುಖಪುಟ.

ಜ್ಯೋತಿಷ್ಯ ಕಲಿಕೆಗೆ ಬಹಳ ಅನುಕೂಲ ಆಗುವಂಥ ಪ್ರಾಥಮಿಕ ಮಾಹಿತಿಯ ಭಂಡಾರವೇ ಇರುವ ಪುಸ್ತಕವೊಂದರ ಪರಿಚಯ ಮಾಡಿಕೊಡುತ್ತಿದ್ದೇನೆ. ಈ ಪುಸ್ತಕದ ಹೆಸರು ಜ್ಯೋತಿಷ್ಯ ಉದಯ ದೀಪಿಕಾ, ಇದರ ಲೇಖಕರು ಕೆ. ಪ್ರಕಾಶ್ ರಾವ್. ದಿ ಕರ್ನಾಟಕ ಅಕಾಡೆಮಿ ಫಾರ್ ಸ್ಟಡೀಸ್ ಅಂಡ್ ರೀಸರ್ಚ್ ಆನ್ ಅಸ್ಟ್ರಾಲಜಿ, ಬೆಂಗಳೂರು ಇಲ್ಲಿನ ಕಾರ್ಯದರ್ಶಿಗಳು.

ಇನ್ನು ಈ ಪುಸ್ತಕವನ್ನು ಶ್ರೀ ವಿನಾಯಕ ಪ್ರಕಾಶನದಿಂದ ಪ್ರಕಟಿಸಲಾಗಿದೆ. ಬೆಲೆ 180 ರೂಪಾಯಿ ಮಾತ್ರ. ಈ ಪುಸ್ತಕದಲ್ಲಿ ಒಟ್ಟು ಹದಿನೆಂಟು ಅಧ್ಯಾಯಗಳು ಇವೆ. ಪಂಚಾಂಗ ಅಂದರೇನು, ಕುಂಡಲಿ ವಿಧಾನಗಳು, ದ್ವಾದಶ ಲಗ್ನಗಳ ಭಾವಗಳಿಗೆ ಅಧಿಪತಿಗಳು, ಗೋಚಾರ ಫಲ, ವಿಂಶೋತ್ತರಿ ದಶಾ, ಇತರ ಮುಖ್ಯ ವಿಷಯಗಳು ಹೀಗೆ ಪ್ರಾಥಮಿಕವಾಗಿ ಜ್ಯೋತಿಷ್ಯ ಕಲಿಕೆಗೆ ಸಹಾಯ ಆಗುವ ಮುಖ್ಯ  ಮಾಹಿತಿಗಳಿವೆ.

ಇನ್ನು ಈ ಪುಸ್ತಕದ ಜೊತೆಗೆ ಸಹಾಯ ಆಗುವಂಥ ಮಾಹಿತಿಯೊಂದನ್ನು ನೀಡಲಾಗುತ್ತಿದೆ. 

ಜ್ಯೋತಿಷ್ಯ- ವಿಜ್ಞಾನದ ಸಮನ್ವಯಕಾರ: ಜ್ಯೋತಿರ್ವಿಜ್ಞಾನದ ಮಹಾಪುರುಷ ವರಾಹಮಿಹಿರ

ಅದೇನೆಂದರೆ, ಕರ್ನಾಟಕ ಜ್ಯೋತಿಷ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ (ನೋಂ). ಈ ಸಂಸ್ಥೆಯು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ. ಈ ಸಂಸ್ಥೆಯು 2010ರಿಂದ ಪ್ರತಿ ವರ್ಷವೂ ಕನ್ನಡದಲ್ಲಿ  ಜ್ಯೋತಿಷ ಪ್ರವೇಶ, ಜ್ಯೋತಿಷ ಪ್ರವೀಣ, ಜ್ಯೋತಿಷ ರತ್ನ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ.

ಇದರ ಜೊತೆಗೆ ಸಂಸ್ಕೃತ ವಿಶ್ವವಿದ್ಯಾಲಯದ  ಜ್ಯೋತಿಷ ಸರ್ಟಿಫಿಕೇಟ್, ಜ್ಯೋತಿಷ ಡಿಪ್ಲೊಮಾದ ಉಪನ್ಯಾಸಗಳನ್ನು ನಡೆಸುತ್ತಾ ಬರುತ್ತಿದೆ. ಪ್ರತಿ ವರ್ಷದ ಏಪ್ರಿಲ್/ಮೇ ತಿಂಗಳಲ್ಲಿ ಜ್ಯೋತಿಷ ತರಗತಿಗಳು ಆರಂಭವಾಗುತ್ತವೆ. 

ಪಂಡಿತ್ ವಿಠ್ಠಲ್ ಭಟ್ ಅವರಿಂದ 2026ರ ವರ್ಷ ಭವಿಷ್ಯ: ಶ್ರೀಗುರುಭ್ಯೋ.ಕಾಮ್ ವಿಶೇಷ ಸಂದರ್ಶನ

ಜ್ಯೋತಿಷವನ್ನು ಕ್ರಮಬದ್ಧವಾಗಿ ಹಾಗೂ ಶೈಕ್ಷಣಿಕವಾಗಿ ಕಲಿಯಲು ಬಯಸುವವರಿಗೆ ಈ ಸಂಸ್ಥೆಯಿಂದ ಸಹಾಯ ಆಗುತ್ತದೆ. ಕೋರ್ಸ್ ಸೇರುವುದಕ್ಕೆ ದೂರವಾಣಿ ಸಂಖ್ಯೆ- 080- 22279208, ಮೊಬೈಲ್ ಫೋನ್ ಸಂಖ್ಯೆಗಳಾದ 9611129208, 9844475547, 9902990973 ಸಂಪರ್ಕಿಸಬಹುದು.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts