ಜ್ಯೇಷ್ಠ ಮಾಸ 2026: ಉನ್ನತ ಸ್ಥಾನಮಾನ ತರುವ ತ್ರಿವಿಕ್ರಮನ ಆರಾಧನೆ

An infographic illustration of Jyeshtha Masa featuring Lord Trivikrama standing on a globe in the center, traditional donation items like sandalwood, umbrella, and water pot on the left, and devotees performing Ganga Pooja by the river on the right.
ನಿಜ ಜ್ಯೇಷ್ಠ ಮಾಸದ ಮಹತ್ವ, ಶ್ರೀ ತ್ರಿವಿಕ್ರಮ ದೇವನ ಆರಾಧನೆ, ಯಥಾಶಕ್ತಿ ದಾನ ಮಾಡಬೇಕಾದ ವಸ್ತುಗಳು ಮತ್ತು ಗಂಗಾ ಪೂಜೆಯ ವಿಧಿ ವಿಧಾನಗಳನ್ನು ವಿವರಿಸುವ ಕಲಾತ್ಮಕ ಇನ್ಫೋಗ್ರಾಫಿಕ್ ಚಿತ್ರ.

ಇದೇ ಜೂನ್ 16ನೇ ತಾರೀಕಿನಿಂದ ನಿಜ ಜ್ಯೇಷ್ಠ ಮಾಸದ ಆರಂಭ ಆಗುತ್ತದೆ. ಜುಲೈ 14ನೇ ತಾರೀಕಿಗೆ ಮಾಸಾಂತ್ಯ ಆಗುತ್ತದೆ. ಈ ಅವಧಿಯಲ್ಲಿ ತಿಳಿಸಿರುವಂಥ ಧಾರ್ಮಿಕ ಆಚರಣೆಗಳು, ದಾನ- ಧರ್ಮದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ಇದನ್ನು ವಿವರಿಸುವುದಕ್ಕೆ ಮುನ್ನ ಹೇಳಬೇಕಾದ ಸಂಗತಿ ಏನೆಂದರೆ, ಆಯಾ ಮಾಸದಲ್ಲಿ ಮಾಡುವಂಥ ದಾನ ಮೊದಲಾದಿ ಕಾರ್ಯಗಳನ್ನು ತಿಳಿಸಲಾಗುತ್ತದೆ. ಅದನ್ನು ತಂತಮ್ಮ ಯಥಾಶಕ್ತಿ ಮಾಡಬಹುದು. ಮಾಡಲೇಬೇಕು ಎಂಬ ಕಡ್ಡಾಯವಿಲ್ಲ. ಕೆಲವರು ಈ ಎಲ್ಲವನ್ನೂ ಮಾಡಲೇಬೇಕು ಎಂದುಕೊಂಡು, ವ್ಯಥೆ ಪಡುತ್ತಾರೆ. ಆ ದೇವರೇ ಅನುಕೂಲ ಕೊಟ್ಟು ಮಾಡಿಸಿಕೊಳ್ಳಬೇಕು. ಆದರೆ ಈ ಎಲ್ಲವನ್ನೂ ನಮ್ಮಿಂದ ಮಾಡಲಿಕ್ಕೆ ಆಗಲ್ಲವಲ್ಲ ಎಂದು ಮನಸ್ಸಿಗೆ ವ್ಯಥೆ ಮಾಡಿಕೊಳ್ಳಬಾರದು. 

ತ್ರಿವಿಕ್ರಮದೇವನ ಪ್ರೀತ್ಯರ್ಥ ದಾನಗಳು

ಜ್ಯೇಷ್ಠಮಾಸದ ಮಾಸನಿಯಾಮಕ ದೇವರು ಶ್ರೀ ತ್ರಿವಿಕ್ರಮದೇವ. ಈ ಮಾಸದಲ್ಲಿ ಭಗವಂತನ ಪ್ರೀತ್ಯರ್ಥವಾಗಿ ಕೆಲವು ನಿರ್ದಿಷ್ಟ ವಸ್ತುಗಳನ್ನು ದಾನ ಮಾಡುವುದರಿಂದ ರಾಜ್ಯಪದವಿ ಅಥವಾ ಉನ್ನತ ಸ್ಥಾನಮಾನಗಳು ಲಭಿಸುತ್ತವೆ ಎಂದು ಶಾಸ್ತ್ರಗಳು ಹೇಳುತ್ತವೆ.

ದಾನ ಮಾಡಬೇಕಾದ ವಸ್ತುಗಳು: 

ಚಂದನ (ಗಂಧ), ಛತ್ರಿ (ಕೊಡೆ), ಬೀಸಣಿಕೆ, ಉದಕುಂಭ (ನೀರಿನಿಂದ ತುಂಬಿದ ಬಿಂದಿಗೆ/ಪಾತ್ರೆ), ಮತ್ತು ಪಾದರಕ್ಷೆಗಳು. ಈ ಸಂದರ್ಭದಲ್ಲಿ ತಂಪು ನೀಡುವ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ.

ಅಥ ದಶಹರಾವ್ರತಮ್ (ಗಂಗಾಪೂಜೆ)

ಜ್ಯೇಷ್ಠ ಶುದ್ಧ ಪಾಡ್ಯದಿಂದ ದಶಮಿಯವರೆಗೆ ದಶಹರಾ ವ್ರತವನ್ನು ಆಚರಿಸಲಾಗುತ್ತದೆ. ಇದು ಮುಖ್ಯವಾಗಿ ಗಂಗಾ ನದಿಯ ಆರಾಧನೆಗೆ ಸಂಬಂಧಿಸಿದ್ದಾಗಿದೆ.

ಮುಕುಂದಮಾಲಾ ಸ್ತೋತ್ರ: ಭಕ್ತಿ- ಶರಣಾಗತಿಯ ಪರಮ ಶಿಖರ

ಸ್ನಾನ ಮತ್ತು ಪೂಜಾ ವಿಧಿ:

ಕಾಶಿಯಲ್ಲಿ ವಾಸಿಸುವವರು ದಶಾಶ್ವಮೇಧ ಘಾಟಿನಲ್ಲಿ ಸ್ನಾನ ಮಾಡಬೇಕು. ಬೇರೆ ಸ್ಥಳಗಳಲ್ಲಿ ಇರುವವರು ಗಂಗಾ ನದಿಯ ಸಮೀಪದಲ್ಲಿದ್ದರೆ ಗಂಗೆಯಲ್ಲಿ, ಒಂದು ವೇಳೆ ದೂರದಲ್ಲಿದ್ದರೆ ತಮ್ಮ ಸಮೀಪದಲ್ಲಿರುವ ಇತರ ಪುಣ್ಯ ನದಿಗಳಲ್ಲಿ ಸ್ನಾನ ಮಾಡಿ ಗಂಗಾದೇವಿಯನ್ನು ಭಕ್ತಿಯಿಂದ ಪೂಜಿಸಬೇಕು.

ವಿಶೇಷ ಯೋಗಗಳು:

ಶ್ಲೋಕದ ಪ್ರಕಾರ (“ಜ್ಯೇಷ್ಠೇ ಮಾಸಿ ಸಿತೇ ಪಕ್ಷೇ…”), ಜ್ಯೇಷ್ಠ ಶುದ್ಧ ದಶಮಿಯ ದಿನದಂದು ಒಟ್ಟು ಹತ್ತು ಪುಣ್ಯ ಯೋಗಗಳು ಒದಗಿಬರುತ್ತವೆ. (ಕೆಲವು ವರ್ಷಗಳಲ್ಲಿ ಇವುಗಳಲ್ಲಿ ಎಂಟು ಯೋಗಗಳು ಕೂಡಿ ಬರುತ್ತವೆ). ಈ ವರ್ಷ ಜೂನ್ 24ನೇ ತಾರೀಕು ಜ್ಯೇಷ್ಠ ಶುಕ್ಲ ಪಕ್ಷದ ದಶಮಿ ಬರುತ್ತದೆ.

ಅಷ್ಟಾವಕ್ರ ಗೀತೆ ಎಂಬ ಅರಿವಿನ ಶಿಖರ, ಆತ್ಮ ಸಾಕ್ಷಾತ್ಕಾರದ ಮಹಾನ್ ಪಥ

ವಿಶೇಷ ಸೇವೆ: 

ಈ ಶುಭ ದಿನದಂದು ಗಂಗಾಪೂಜೆಯನ್ನು ವಿಶೇಷವಾಗಿ ನೆರವೇರಿಸಿ, ಹತ್ತು ಜನ ಬ್ರಾಹ್ಮಣ ಸುವಾಸಿನಿಯರನ್ನು (ಮುತ್ತೈದೆಯರನ್ನು) ಪೂಜಿಸಿ, ಗೌರವಿಸಬೇಕು.

ತ್ರಿವಿಕ್ರಮಪೂಜೆ ಮತ್ತು ಉದಕುಂಭ ದಾನ

ಜ್ಯೇಷ್ಠ ಶುದ್ಧ ತ್ರಯೋದಶಿಯ ದಿನದಂದು (ಜೂನ್ 27, 2026) ಶ್ರೀ ತ್ರಿವಿಕ್ರಮ ದೇವರನ್ನು ವಿಶೇಷವಾಗಿ ಆರಾಧಿಸಲಾಗುತ್ತದೆ.

ಪೂಜಾ ವಿಧಾನ: 

ಈ ದಿನ ಶ್ರೀ ತ್ರಿವಿಕ್ರಮನನ್ನು ಭಕ್ತಿಯಿಂದ ಪೂಜಿಸಿ, ಕೆಳಗಿನ ಮಂತ್ರವನ್ನು ಪಠಿಸಬೇಕು:

“ದೇವದೇವ ಹೃಷೀಕೇಶ ಸಂಸಾರಾರ್ಣವತಾರಕ | ಉದಕುಂಭಪ್ರದಾನೇನ ಯಾಸ್ಯಾಮಿ ಪರಮಾಂ ಗತಿಮ್ ||”

ಯಕ್ಷಪ್ರಶ್ನೆ: ಸತ್ತ ತಮ್ಮಂದಿರನ್ನು ಬದುಕಿಸಲು ಯುಧಿಷ್ಠಿರ ನೀಡಿದ ಉತ್ತರಗಳಿವು; ಇಂದಿನ ಬದುಕಿನ ಪ್ರತಿ ಸಮಸ್ಯೆಗೂ ಇಲ್ಲಿವೆ ಶಾಶ್ವತ ಪರಿಹಾರಗಳು!

ಸಕ್ಕರೆ ಮತ್ತು ಸುವರ್ಣಯುಕ್ತ ದಾನ: ಈ ಮಂತ್ರವನ್ನು ಪಠಿಸುತ್ತಾ ಸಕ್ಕರೆ ಹಾಗೂ ಚಿನ್ನದ (ಸುವರ್ಣ) ಅಂಶವನ್ನು ಒಳಗೊಂಡ, ಶುದ್ಧ ನೀರಿನಿಂದ ತುಂಬಿದ ಉದಕುಂಭವನ್ನು (ನೀರಿನ ಪಾತ್ರೆ) ದಾನ ಮಾಡಬೇಕು. ಇದರಿಂದ ಸಂಸಾರ ಸಾಗರದಿಂದ ಮುಕ್ತಿ ಸಿಗುತ್ತದೆ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts