ಅಧಿಕ ಮಾಸ 2026: ಯಾವ ದಾನ ಮಾಡಿದರೆ ಏನು ಫಲ? ಅತಿರಸ ದಾನದ ಮಹತ್ವ ಮತ್ತು ಪೂರ್ಣ ಮಾಹಿತಿ ಇಲ್ಲಿದೆ

A South Indian woman in a temple donating a platter of traditional Atirasa sweets, fruits, and a lamp to a seated priest during Adhika Masa.
ಅಧಿಕ ಮಾಸದ ಪುಣ್ಯ ಕಾಲದಲ್ಲಿ 'ಅಪೂಪ' (ಅತಿರಸ) ಮತ್ತು ಇತರ ವಸ್ತುಗಳನ್ನು ದಾನ

ಇದೇ ಮೇ 17ನೇ ತಾರೀಕಿನಿಂದ ಜೂನ್ 15ನೇ ತಾರೀಕಿನರೆಗೆ ‘ಅಧಿಕ ಜ್ಯೇಷ್ಠ ಮಾಸ’ ಬರಲಿದೆ. ಈ ಅಧಿಕ ಮಾಸ (ಪುರುಷೋತ್ತಮ ಮಾಸ) ಅತ್ಯಂತ ಪವಿತ್ರವಾದ ಸಮಯ. ಈ ಮಾಸದಲ್ಲಿ ಮಾಡುವ ದಾನ-ಧರ್ಮಗಳು ಸಾಮಾನ್ಯ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಫಲ ನೀಡುತ್ತವೆ. ಅದಕ್ಕೇ ‘ಅಧಿಕಸ್ಯ ಅಧಿಕ ಫಲಂ’ ಎಂಬ ಮಾತೇ ಇದೆ. ಅಧಿಕ ಮಾಸದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು ಮತ್ತು ಅವುಗಳಿಂದ ಸಿಗುವ ಫಲಗಳೇನು ಎಂಬ ವಿವರವಾದ ಮಾಹಿತಿ ಇಲ್ಲಿದೆ:

ಅಧಿಕ ಮಾಸದ ಪ್ರಮುಖ ದಾನಗಳು ಮತ್ತು ಫಲಗಳು

ಅಧಿಕ ಮಾಸದಲ್ಲಿ ಮುಖ್ಯವಾಗಿ ಅಪೂಪ (ಅತಿರಸ) ದಾನಕ್ಕೆ ವಿಶೇಷ ಪ್ರಾಮುಖ್ಯ ಇದೆ. ಬೆಳ್ಳಿಯ ಅಥವಾ ತಾಮ್ರದ ಪಾತ್ರೆಯಲ್ಲಿ 33 ಅತಿರಸಗಳನ್ನು ಇಟ್ಟು ದಾನ ಮಾಡುವುದು ಶ್ರೇಷ್ಠ. ಇದು ಶಾಸ್ತ್ರದಲ್ಲಿ ಇರುವ ಪ್ರಮಾಣವಾದ್ದರಿಂದ ನೀಡಲಾಗುತ್ತಿದೆ. ಇನ್ನು ದಾನ ಮಾಡುವವರು ಶಕ್ತ್ಯಾನುಸಾರ ತಮ್ಮಿಂದ ಏನು ಸಾಧ್ಯವೋ ಅದರಲ್ಲಿ ಇಟ್ಟು, ದಾನ ಮಾಡಬಹುದು.

ದಾನ ಮಾಡುವ ವಸ್ತು ಸಿಗುವ ಫಲ / ಪ್ರಯೋಜನ
ಅಪೂಪ (ಅತಿರಸ/ಕಜ್ಜಾಯ) ಸಕಲ ಪಾಪಗಳ ನಿವಾರಣೆ ಮತ್ತು ಅಶ್ವಮೇಧ ಯಾಗ ಮಾಡಿದ ಪುಣ್ಯ ಲಭಿಸುತ್ತದೆ.
ದೀಪ ದಾನ ಜೀವನದ ಅಂಧಕಾರ ದೂರವಾಗಿ, ಜ್ಞಾನ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ.
ಧಾನ್ಯ ದಾನ (ಅಕ್ಕಿ, ಗೋಧಿ) ಮನೆಯಲ್ಲಿ ಅನ್ನಪೂರ್ಣೇಶ್ವರಿಯ ಅನುಗ್ರಹ ಸದಾ ಇರುತ್ತದೆ, ದಾರಿದ್ರ್ಯ ನಾಶವಾಗುತ್ತದೆ.
ವಸ್ತ್ರ ದಾನ ಆಯಸ್ಸು ವೃದ್ಧಿಯಾಗುತ್ತದೆ ಮತ್ತು ಸಮಾಜದಲ್ಲಿ ಗೌರವ ಲಭಿಸುತ್ತದೆ.
ತಾಂಬೂಲ ದಾನ ಸೌಭಾಗ್ಯ ವೃದ್ಧಿ ಮತ್ತು ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ.
ಬೆಲ್ಲ ಮತ್ತು ತುಪ್ಪ ಆರೋಗ್ಯ ವೃದ್ಧಿಯಾಗುತ್ತದೆ ಮತ್ತು ಕಠಿಣ ರೋಗಗಳಿಂದ ಮುಕ್ತಿ ಸಿಗುತ್ತದೆ.
ಫಲ ದಾನ (ಹಣ್ಣುಗಳು) ಮನೋಕಾಮನೆಗಳು ಈಡೇರುತ್ತವೆ ಮತ್ತು ಸಂತಾನ ಭಾಗ್ಯ ಲಭಿಸುತ್ತದೆ.
ಛತ್ರಿ ಮತ್ತು ಪಾದರಕ್ಷೆ ಪಿತೃ ದೋಷಗಳ ನಿವಾರಣೆಯಾಗುತ್ತದೆ ಮತ್ತು ಪರಲೋಕದಲ್ಲಿ ಸುಗತಿ ಸಿಗುತ್ತದೆ.

ದಾನ ಮಾಡುವಾಗ ಗಮನಿಸಬೇಕಾದ ಅಂಶಗಳು

  • ಸಂಖ್ಯೆ 33: ಅಧಿಕ ಮಾಸದಲ್ಲಿ 33 ಎಂಬ ಸಂಖ್ಯೆಗೆ ವಿಶೇಷ ಮಹತ್ವವಿದೆ. ಆದ್ದರಿಂದ 33 ಅತಿರಸಗಳು, 33 ಹಣ್ಣುಗಳು ಅಥವಾ 33 ದೀಪಗಳನ್ನು ದಾನ ಮಾಡುವುದು ಸಂಪ್ರದಾಯ.
  • ಸಂಕಲ್ಪ: ದಾನ ಮಾಡುವ ಮೊದಲು “ಶ್ರೀ ಪುರುಷೋತ್ತಮ ಪ್ರೀತ್ಯರ್ಥಂ” ಎಂದು ಸಂಕಲ್ಪ ಮಾಡಿ ದಾನ ನೀಡುವುದು ಹೆಚ್ಚು ಫಲಪ್ರದ.
  • ಪಾತ್ರೆ ದಾನ: ಅತಿರಸ ಅಥವಾ ಸಿಹಿತಿಂಡಿಗಳನ್ನು ಬಿದಿರಿನ ಮೊರ ಅಥವಾ ಲೋಹದ ಪಾತ್ರೆಯಲ್ಲಿಟ್ಟು ದಾನ ಮಾಡುವುದು ಉತ್ತಮ.

2026 ಅಧಿಕ ಜ್ಯೇಷ್ಠ ಮಾಸ: ಈ ತಿಂಗಳಲ್ಲಿ ಮದುವೆ-ಮುಂಜಿ ಏಕೆ ಮಾಡಬಾರದು? ಈ ಅವಧಿಯಲ್ಲಿ ಮಾಡಬೇಕಾದ ದಾನ-ಧರ್ಮಗಳಿವು

ವಿಶೇಷ ಸೂಚನೆ: ಅಧಿಕ ಮಾಸದಲ್ಲಿ ಮಾಡುವ ದಾನವು ಕೇವಲ ಭೌತಿಕ ಲಾಭಕ್ಕಾಗಿ ಇರದೆ, ಭಗವಂತನ ಪ್ರೀತಿಗಾಗಿ ಮಾಡುವ ನಿಷ್ಕಾಮ ಕರ್ಮವಾಗಿದ್ದರೆ ಅದರ ಪುಣ್ಯ ಅಕ್ಷಯವಾಗಿರುತ್ತದೆ. ನಿಮ್ಮ ಶಕ್ತಿಗನುಗುಣವಾಗಿ ಭಕ್ತಿಯಿಂದ ನೀಡುವ ಒಂದು ಸಣ್ಣ ದಾನವೂ ದೊಡ್ಡ ಫಲವನ್ನು ನೀಡಬಲ್ಲದು.

ಅಪೂಪ ದಾನವನ್ನು ಮಾಡಬೇಕು ಎಂಬ ಉದ್ದೇಶವಿದ್ದು, ಇದಕ್ಕೆ ಸಿದ್ಧಮಾಡಿಕೊಡಲು, ಸಿದ್ಧ ಮಾಡಿಕೊಳ್ಳಲು ನೆರವಿನ ಅಗತ್ಯ ಇರುವವರು ಮೊಬೈಲ್ ಫೋನ್ ಸಂಖ್ಯೆ 96202- 16525 ಸಂಪರ್ಕಿಸಿ. ವಾಟ್ಸಾಪ್ ಮೂಲಕವೂ ಸಂಪರ್ಕಿಸಬಹುದು.  ಅದೇ ರೀತಿ ಜ್ಯೋತಿಷ್ಯ ಕನ್ಸಲ್ಟೇಷನ್ ಗಾಗಿ ಈ ಮೇಲಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು. 

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts