ಬೆಂಗಳೂರು: ಸರಳವಾಗಿ ಹಾಗೂ ಅದೇ ವೇಳೆ ಸಾಂಪ್ರದಾಯಿಕವಾಗಿ ಬ್ರಹ್ಮೋಪದೇಶ ಅಥವಾ ಉಪನಯನವನ್ನು ಮಾಡುವುದಕ್ಕೆ ಬಯಸುವವರಿಗೆ ಸಾಮೂಹಿಕ ಉಪನಯನವನ್ನು ಆಯೋಜಿಸಲಾಗಿದೆ. ಧಾರ್ಮಿಕ ಸಂಸ್ಕಾರಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಂಗಳೂರಿನ ವಿಪ್ರ ವೃಂದ (ರಿ) ಮತ್ತು ದೇವಗಿರಿ ಶ್ರೀ ವೆಂಕಟೇಶ್ವರ ಟ್ರಸ್ಟ್ (ರಿ) ಇವುಗಳ ಸಂಯುಕ್ತ ಆಶ್ರಯದಲ್ಲಿ ಬ್ರಾಹ್ಮಣ ವಟುಗಳಿಗಾಗಿ ‘ಸಾಮೂಹಿಕ ಉಚಿತ ಉಪನಯನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ಮಾರ್ತ, ವೈಷ್ಣವ ಹಾಗೂ ಶ್ರೀವೈಷ್ಣವ ಹೀಗೆ ತ್ರಿಮತಸ್ಥ ಬ್ರಾಹ್ಮಣರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಇದೆ.
ಕಾರ್ಯಕ್ರಮದ ವಿವರಗಳು:
ಸನಾತನ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಒಂದಾದ ಉಪನಯನವನ್ನು ಸಾಮೂಹಿಕವಾಗಿ ನೆರವೇರಿಸಲು ಇಚ್ಛಿಸುವ ತ್ರಿಮತಸ್ಥ ಬ್ರಾಹ್ಮಣ ಕುಟುಂಬಗಳ ವಟುಗಳಿಗಾಗಿ ಈ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ.
- ದಿನಾಂಕ: 24 ಜೂನ್ 2026, ಬುಧವಾರ.
- ಸ್ಥಳ: ದೇವಗಿರಿ ಶ್ರೀ ವರಪ್ರದ ವೆಂಕಟೇಶ್ವರ ದೇವಸ್ಥಾನ, ಬನಶಂಕರಿ 2ನೇ ಹಂತ, ಬೆಂಗಳೂರು.
ನೋಂದಣಿ ಪ್ರಕ್ರಿಯೆ:
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
- ನೋಂದಾಯಿಸಲು ಕೊನೆಯ ದಿನಾಂಕ: 31 ಮೇ 2026.
ಉಪನಯನ ನಂತರದ ವೇದವ್ರತಗಳು: ಮಹಾನಾಮ್ನಿ, ಗೋದಾನ, ಚತುರ್ವೇದ ವ್ರತಗಳ ಸಂಪೂರ್ಣ ಮಾಹಿತಿ
ಸಂಪರ್ಕಿಸಿ:
ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿಗಾಗಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:
- 95913 38868
- 94480 76346
- 98805 96436
- 99010 66197
- 99008 79510
- ದೂರವಾಣಿ: 080-2691 9703 / 2671 6979
ವಿಳಾಸ: ವಿಪ್ರ ವೃಂದ (ರಿ), ನಂ. 52/9, 3ನೇ ಅಡ್ಡರಸ್ತೆ, ಎಸ್.ಬಿ.ಎಂ. ಕಾಲೋನಿ, ಬನಶಂಕರಿ ಮೊದಲನೇ ಹಂತ, ಬೆಂಗಳೂರು – 560 050.
ಉಪನಯನ ಅಥವಾ ಬ್ರಹ್ಮೋಪದೇಶ: ಶಾಸ್ತ್ರದ ಪ್ರಕಾರ ಯಾವ ವಯಸ್ಸಿನಲ್ಲಿ ಮುಂಜಿ ಮಾಡುವುದು ಶ್ರೇಯಸ್ಕರ?
ಗಮನಿಸಿ: ಸಂಪ್ರದಾಯಬದ್ಧವಾಗಿ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮದ ಸದುಪಯೋಗವನ್ನು ಅರ್ಹ ಕುಟುಂಬಗಳು ಪಡೆದುಕೊಳ್ಳಬೇಕೆಂದು ಆಯೋಜಕರು ವಿನಂತಿಸಿದ್ದಾರೆ.
ಲೇಖನ- ಶ್ರೀನಿವಾಸ ಮಠ









