Sri Gurubhyo Logo

2026ರ ಯುಗಾದಿ ಭವಿಷ್ಯ: ಪರಾಭವ ಸಂವತ್ಸರದ ನವನಾಯಕರು, ಮಳೆ-ಬೆಳೆ ವಿವರ

An artistic representation of Parabhava Nama Samvatsara 2026-27 featuring Hindu deities Guru and Kuja, planetary alignments, and a traditional temple background with lush green fields.
2026-27ನೇ ಸಾಲಿನ 'ಪರಾಭವ' ನಾಮ ಸಂವತ್ಸರದ ನವನಾಯಕರು ಮತ್ತು ವರ್ಷ ಭವಿಷ್ಯದ ಒಂದು ನೋಟ. ಈ ವರ್ಷದ ರಾಜ ಗುರು ಮತ್ತು ಮಂತ್ರಿ ಕುಜನ ಪ್ರಭಾವ ಹೇಗಿರಲಿದೆ?

ಇದೇ ಮಾರ್ಚ್ 19, 2026ರಂದು ಚಾಂದ್ರಮಾನ ಯುಗಾದಿಯೊಂದಿಗೆ ಹೊಸ ಸಂವತ್ಸರವಾದ ‘ಪರಾಭವ’ ಆರಂಭವಾಗುತ್ತಿದೆ. ಈ ಸಂವತ್ಸರದಲ್ಲಿ ಜ್ಯೋತಿಷ್ಯ ರೀತಿಯಾಗಿ ಆಡಳಿತ ನಡೆಸುವವರು ಯಾರು, ಅದರಿಂದ ಆಗುವ ಫಲಿತಾಂಶ ಏನು ಎಂಬುದರ ವಿವರ ಇಲ್ಲಿದೆ. ಗ್ರಹಗಳಿಗೆ ಪ್ರಭಾವ ಬೀರುವ ಶಕ್ತಿ ಇದೆ ಎಂಬುದನ್ನು ಆಧಾರವಾಗಿಟ್ಟುಕೊಂಡು, ಫಲಾಫಲಗಳನ್ನು ತಿಳಿಸಲಾಗುತ್ತಾ ಇದೆ. ಅಂದಹಾಗೆ ಈ ಸಂವತ್ಸರದಲ್ಲಿ ಗುರು ಮತ್ತು ಚಂದ್ರನ ಪ್ರಭಾವ ಹೆಚ್ಚಾಗಿರುವುದು ಕಂಡುಬರುತ್ತದೆ. ರಾಜನಾಗಿ ಗುರುವು ಅಧಿಕಾರ ವಹಿಸಿಕೊಂಡಿರುವುದರಿಂದ ಸಾತ್ವಿಕ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ಸಿಗಲಿದೆ.

ವರ್ಷದ ಪ್ರಮುಖ ಮುಖ್ಯಾಂಶಗಳು:

  • ಗುರು ರಾಜನಾಗಿರುವುದರಿಂದ: ಶಿಕ್ಷಣ, ಸಂಪ್ರದಾಯ ಮತ್ತು ಧರ್ಮದ ಕ್ಷೇತ್ರದಲ್ಲಿ ಸುಧಾರಣೆಗಳು ಕಂಡುಬರುತ್ತವೆ. ಜನರ ಮನಸ್ಥಿತಿ ಶಾಂತಿಯುತವಾಗಿರುವ ಸಾಧ್ಯತೆಯಿದೆ.
  • ಕುಜ ಮಂತ್ರಿಯಾಗಿರುವುದರಿಂದ: ದೇಶದ ರಕ್ಷಣಾ ಇಲಾಖೆ ಮತ್ತು ಆಡಳಿತಾತ್ಮಕ ನಿರ್ಧಾರಗಳಲ್ಲಿ ಕಠಿಣ ಕ್ರಮಗಳನ್ನು ನಿರೀಕ್ಷಿಸಬಹುದು.
  • ಚಂದ್ರನ ಆಧಿಪತ್ಯ: ಸೇನಾಧಿಪತಿ, ಮೇಘಾಧಿಪತಿ ಮತ್ತು ಅರ್ಘಾಧಿಪತಿಯಾಗಿ ಚಂದ್ರನಿರುವುದರಿಂದ ಮಳೆ-ಬೆಳೆ ಉತ್ತಮವಾಗಿದ್ದರೂ ಬೆಲೆ ಏರಿಳಿತಗಳಲ್ಲಿ ಅನಿಶ್ಚಿತತೆ ಕಂಡುಬರಬಹುದು.
  • ಸಸ್ಯಾಧಿಪತಿ ಗುರು: ಕೃಷಿ ಕ್ಷೇತ್ರದಲ್ಲಿ ಜ್ಞಾನಾಧಾರಿತ ಬೆಳವಣಿಗೆ ಮತ್ತು ಸಾತ್ವಿಕ ಆಹಾರ ಪದಾರ್ಥಗಳ ಇಳುವರಿ ಉತ್ತಮವಾಗಿರುತ್ತದೆ.

ನವನಾಯಕರು ಮತ್ತು ಅವರ ಫಲಿತಾಂಶಗಳ ಕೋಷ್ಟಕ

ಕ್ರ.ಸಂ ಅಧಿಕಾರ (ನಾಯಕರು) ಗ್ರಹ / ದೇವತೆ ನಿರೀಕ್ಷಿತ ಫಲ
1 ರಾಜ ಗುರು ಧರ್ಮೋನ್ನತಿ, ನ್ಯಾಯದ ಜಯ, ಸುಖ-ಶಾಂತಿ.
2 ಮಂತ್ರಿ ಕುಜ ಧೈರ್ಯದ ನಿರ್ಧಾರಗಳು, ತಾಂತ್ರಿಕ ಪ್ರಗತಿ.
3 ಸೇನಾಧಿಪತಿ ಚಂದ್ರ ಶಾಂತಿಯುತ ರಕ್ಷಣಾ ವ್ಯವಸ್ಥೆ, ಜನಪ್ರಿಯ ಯೋಜನೆಗಳು.
4 ಮೇಘಾಧಿಪತಿ ಚಂದ್ರ ಸಕಾಲಿಕ ಮಳೆ, ಜಲಸಂಪನ್ಮೂಲ ವೃದ್ಧಿ.
5 ಸಸ್ಯಾಧಿಪತಿ ಗುರು ಪೌಷ್ಟಿಕ ಆಹಾರೋತ್ಪನ್ನಗಳ ಹೇರಳ ಉತ್ಪಾದನೆ.
6 ಧಾನ್ಯಾಧಿಪತಿ ಗುರು ಧಾನ್ಯಗಳ ಸಂಗ್ರಹ ಮತ್ತು ಮಾರುಕಟ್ಟೆ ಸ್ಥಿರತೆ.
7 ಅರ್ಘಾಧಿಪತಿ ಚಂದ್ರ ಬೆಲೆಗಳಲ್ಲಿ ಮೃದು ಧೋರಣೆ, ಸುಲಭ ಲಭ್ಯತೆ.
8 ರಸಾಧಿಪತಿ ಶನಿ ತೈಲ ಮತ್ತು ರಸ ಪದಾರ್ಥಗಳ ಬೆಲೆಯಲ್ಲಿ ಏರಿಕೆ.
9 ನೀರಸಾಧಿಪತಿ ಗುರು ಲೋಹಗಳು ಮತ್ತು ಅಮೂಲ್ಯ ವಸ್ತುಗಳ ಬೆಲೆ ಸ್ಥಿರತೆ.
10 ಪಶುಪಾಲಕ ಶ್ರೀಕೃಷ್ಣ ಜಾನುವಾರುಗಳ ಆರೋಗ್ಯ ಮತ್ತು ಕ್ಷೀರೋತ್ಪನ್ನ ವೃದ್ಧಿ.

ಹಣೆಬರಹವನ್ನೇ ಬದಲಿಸಬಲ್ಲ ಶಕ್ತಿಶಾಲಿ ಕ್ಷೇತ್ರ: ತಿರುಪತ್ತುರ್ ಬ್ರಹ್ಮಪುರೀಶ್ವರರ್ ದೇವಾಲಯ!

ಉಪನಾಯಕರ ವಿವರವಾದ ಪಟ್ಟಿ (30 ವಿಭಾಗಗಳು)

ಪರಾಭವ ಸಂವತ್ಸರದಲ್ಲಿ ವ್ಯವಹಾರದ ಪ್ರತಿಯೊಂದು ವಿಭಾಗವನ್ನೂ ಈ ಕೆಳಗಿನ ಉಪನಾಯಕರು ನಿರ್ವಹಿಸಲಿದ್ದಾರೆ:

ವಿಭಾಗ ಅಧಿಪತಿ ವಿಭಾಗ ಅಧಿಪತಿ
ಧನಾಧಿಪತಿ ಶನಿ ಫಲಪುಷ್ಪಾಧಿಪತಿ ಚಂದ್ರ
ಪೂರ್ವಸಸ್ಯಾಧಿಪತಿ ಗುರು ಅಪರಸಸ್ಯಾಧಿಪತಿ ಚಂದ್ರ
ಕೋಶಾಧಿಪತಿ ಶುಕ್ರ ಛತ್ರಾಧಿಪತಿ ಗುರು
ಆಜ್ಞಾಧಿಪತಿ ಕುಜ ಯುದ್ಧಾಧಿಪತಿ ಚಂದ್ರ
ವ್ಯವಹಾರಾಧಿಪತಿ ಶನಿ ವ್ಯಾಪಾರಾಧಿಪತಿ ಚಂದ್ರ
ಪ್ರತಾಪಾಧಿಪತಿ ಚಂದ್ರ ಅಶ್ವಾಧಿಪತಿ ಗುರು
ಗಜಾಧಿಪತಿ ಕುಜ ಪಶ್ಯಾಧಿಪತಿ ಚಂದ್ರ
ವೃಷಭಾಧಿಪತಿ ಬುಧ ಖರಾಧಿಪತಿ ಗುರು
ಮೂಷಕಾಧಿಪತಿ ಚಂದ್ರ ದೇವಾಧಿಪತಿ ಗುರು
ನರಾಧಿಪತಿ ಗುರು ದ್ರವ್ಯಾಧಿಪತಿ ಚಂದ್ರ
ಗಿಡಬಳ್ಳಿ ಅಧಿಪತಿ ಚಂದ್ರ ವಸ್ತ್ರಾಧಿಪತಿ ಶನಿ
ತೃಣಾಧಿಪತಿ ಚಂದ್ರ ಕಾಷ್ಠಾಧಿಪತಿ ಗುರು
ಸರ್ಪಾಧಿಪತಿ ಚಂದ್ರ ಮೃಗಾಧಿಪತಿ ಬುಧ
ಸ್ತ್ರೀಣಾಮಾಧಿಪತಿ ಚಂದ್ರ ನವರತ್ನಾಧಿಪತಿ ಚಂದ್ರ
ಮಾಂಗಲ್ಯಾಧಿಪತಿ ಶನಿ ಸರ್ವೇಷಾಂ ಅಧಿಪತಿ ಗುರು

ಕೊನೆ ಮಾತು:

ಈ ಸಂವತ್ಸರದಲ್ಲಿ ಗುರು ಮತ್ತು ಚಂದ್ರ ಗ್ರಹಗಳ ಪ್ರಭಾವ ಹೆಚ್ಚಿರುವುದರಿಂದ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಯಲಿದೆ. ಶುಕ್ರನು ಕೋಶಾಧಿಪತಿಯಾಗಿರುವುದರಿಂದ ಆರ್ಥಿಕವಾಗಿ ಕೆಲವು ಕ್ಷೇತ್ರಗಳಲ್ಲಿ ಲಾಭದಾಯಕ ವಾತಾವರಣವಿರುತ್ತದೆ. ಒಟ್ಟಾರೆಯಾಗಿ ಇದು ಸಾತ್ವಿಕ ಮತ್ತು ಆಡಳಿತಾತ್ಮಕವಾಗಿ ಸಮತೋಲನದ ವರ್ಷವಾಗಿರಲಿದೆ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts