Sri Gurubhyo Logo

ಭೃಗು-ಅಂಗಾರಕ ಯುತಿಯಿಂದ ಜಾಗತಿಕ ಸಂಘರ್ಷ, ಆರೋಗ್ಯದ ಮೇಲೆ ಪ್ರಭಾವ

A surreal illustration showing Venus and Mars colliding in space, with glowing energies impacting a human torso (urinary and reproductive organs) and scenes of worldly war and conflict below.
ಶುಕ್ರ ಮತ್ತು ಮಂಗಳನ ಸ್ಫೋಟಕ ಯುತಿ: ಆರೋಗ್ಯ ಮತ್ತು ಜಾಗತಿಕ ರಾಜಕೀಯದ ಮೇಲಿನ ಅದರ ಪ್ರಭಾವವನ್ನು ತೋರಿಸುವ ಸಾಂಕೇತಿಕ ಚಿತ್ರಣ.

ಲೇಖನ- ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)

ಭೃಗು- ಅಂಗಾರಕ ಯೋಗದ ಬಗ್ಗೆ ಆಸಕ್ತಿಕರವಾದ ಮಾಹಿತಿ ಇಲ್ಲಿದೆ. ಫೆಬ್ರವರಿ  ಜೋತಿಷ್ಯ ಶಾಸ್ತ್ರದ ದೃಷ್ಟಿಕೋನದಲ್ಲಿ ಶುಕ್ರ (ಭೃಗು) ಮತ್ತು ಮಂಗಳ (ಅಂಗಾರಕ) ಗ್ರಹಗಳ ಯುತಿಯು ಅತ್ಯಂತ ಪ್ರಭಾವಶಾಲಿ ಹಾಗೂ ಸಂಕೀರ್ಣವಾದದ್ದು. ಈ ಯುತಿಯು ಜಾಗತಿಕ ರಾಜಕೀಯ ಮತ್ತು ವ್ಯಕ್ತಿಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರ (ಭೃಗು) ಪ್ರೇಮ, ಐಹಿಕ ಸುಖ ಮತ್ತು ಸೃಜನಶೀಲತೆಯ ಸಂಕೇತವಾದರೆ, ಮಂಗಳ (ಅಂಗಾರಕ) ಶಕ್ತಿ, ಆಕ್ರಮಣಕಾರಿ ಸ್ವಭಾವ ಮತ್ತು ಯುದ್ಧದ ಕಾರಕ. ಈ ಎರಡು ಭಿನ್ನ ಪ್ರಕೃತಿಯ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ (ಯುತಿ), ಅದು ಸಮಾಜ ಮತ್ತು ವೈಯಕ್ತಿಕ ಜೀವನದಲ್ಲಿ ದೊಡ್ಡ ಮಟ್ಟದ ಏರುಪೇರುಗಳನ್ನು ಉಂಟುಮಾಡುತ್ತದೆ.

ಫೆಬ್ರವರಿ 22ನೇ ತಾರೀಕಿನಂದು ಕುಜ ಗ್ರಹವು ಕುಂಭ ರಾಶಿಯನ್ನು ಪ್ರವೇಶಿಸಿ, ಕುಜ- ಶುಕ್ರ ಯುತಿಗೆ ಕಾರಣ ಆಯಿತು. ಮಾರ್ಚ್ 1ನೇ ತಾರೀಕಿನ ತನಕ ಈ ಯುತಿ ಕುಂಭದಲ್ಲಿ ಇರುತ್ತದೆ. ಮಾರ್ಚ್ ಒಂದನೇ ತಾರೀಕಿನ ತನಕ ಈ ಪ್ರಭಾವ ತೀವ್ರವಾಗಿ ಇರಲಿ. ಇನ್ನು ಮಾರ್ಚ್ ಮೂರನೇ ತಾರೀಕಿನಂದು ಸಿಂಹ ರಾಶಿಯಲ್ಲಿ ಕೇತು ಗ್ರಸ್ತ ಚಂದ್ರ ಗ್ರಹಣವೂ ಇದೆ. ಆದ್ದರಿಂದಾಗಿ ಮಳೆ ನಿಂತರೂ ಹನಿ ನಿಲ್ಲಲ್ಲ ಎಂಬಂತೆ ಇನ್ನೂ ಕೆಲ ದಿನ ಈ ಪರಿಸ್ಥಿತಿ ಮುಂದುವರಿಯುತ್ತದೆ. 

1. ಜಾಗತಿಕ ಸಂಘರ್ಷ ಮತ್ತು ಯುದ್ಧದ ಹಾದಿ

ಶುಕ್ರ-ಮಂಗಳರ ಯುತಿಯು ಧನು ರಾಶಿಯಿಂದ ಕುಂಭ ರಾಶಿಯವರೆಗೆ ಸಾಗಿಬಂದ ಹಾದಿಯನ್ನು ಗಮನಿಸಿದರೆ, ವಿಶ್ವದಾದ್ಯಂತ ಅಶಾಂತಿಯ ವಾತಾವರಣ ಎದ್ದುಕಾಣುತ್ತಿದೆ:

  • ಧನು ರಾಶಿಯಲ್ಲಿ ಯುತಿ: ಇದು ಬೆಂಕಿಯ ತತ್ವದ ರಾಶಿಯಾದ್ದರಿಂದ, ಯುದ್ಧದ ಕಿಚ್ಚು ತಾರಕಕ್ಕೇರಿತು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಶಸ್ತ್ರಾಸ್ತ್ರ ಸಂಘರ್ಷಕ್ಕೆ ನಾಂದಿ ಹಾಡಿದವು.
  • ಮಕರ ರಾಶಿಯಲ್ಲಿ ಯುತಿ: ಮಕರವು ಶನಿಯ ಮನೆಯಾಗಿದ್ದು, ಇಲ್ಲಿ ಮಂಗಳ ಉಚ್ಛನಾಗುತ್ತಾನೆ. ಆರಂಭದಲ್ಲಿ ಸಂಯಮ ಕಂಡುಬಂದರೂ ಒಳಗೊಳಗೇ ಸಂಚು ರೂಪಿತವಾಗಿ ಮತ್ತೆ ಹತ್ಯಾಕಾಂಡಗಳು ಮತ್ತು ರಕ್ತಪಾತಗಳು ಮುಂದುವರಿದವು.
  • ಕುಂಭ ರಾಶಿಯಲ್ಲಿನ ಪ್ರಸ್ತುತ ಸ್ಥಿತಿ: ಪ್ರಸ್ತುತ ಕುಂಭ ರಾಶಿಯಲ್ಲಿ ಈ ಯುತಿ ನಡೆಯುತ್ತಿದ್ದು, ಇದು ವಾಯು ತತ್ವದ ರಾಶಿಯಾಗಿದೆ. ಇಲ್ಲಿಯೂ ಸಹ ಆರಂಭಿಕ ಶಾಂತಿಯ ನಂತರ ಈಗ ಸಂಘರ್ಷ ಸ್ಫೋಟಗೊಂಡಿದೆ. ಉದಾಹರಣೆಗೆ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿಭಾಗದಲ್ಲಿ ನಡೆಯುತ್ತಿರುವ ಯುದ್ಧವು ಇದಕ್ಕೆ ಸಾಕ್ಷಿ.
ಭೃಗು ಅಂಗಾರಕ ಯುತಿಯ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ
ಜ್ಯೋತಿಷಿ ಹಾಗೂ ಅಧ್ಯಾತ್ಮ ಚಿಂತಕರಾದ ಪ್ರಕಾಶ್ ಅಮ್ಮಣ್ಣಾಯ

2. ಅಧಿಕಾರ ಮದ ಮತ್ತು ರಾಜಕೀಯ ವ್ಯತಿರಿಕ್ತತೆ

ಈ ಯುತಿಯನ್ನು ‘ಅಧಿಕಾರ ಯೋಗ’ ಎಂದೂ ಕರೆಯಲಾಗುತ್ತದೆ. ಆದರೆ ಈ ಯೋಗವು ಜ್ಯೋತಿಷ್ಯದ ದೃಷ್ಟಿಯಲ್ಲಿ ದ್ವಂದ್ವ ಫಲ ನೀಡುತ್ತದೆ:

  • ಅರ್ಹ ವ್ಯಕ್ತಿಗಳಿಗೆ ಉನ್ನತ ಅಧಿಕಾರ ಸಿಕ್ಕರೆ, ಅಹಂಕಾರಿಗಳಲ್ಲಿ ‘ಅಧಿಕಾರ ಮದ’ ನೆತ್ತಿಗೇರುತ್ತದೆ.
  • ಇದರ ಪರಿಣಾಮವಾಗಿ ಆಡಳಿತಗಾರರಲ್ಲಿ ಹಠಮಾರಿ ಧೋರಣೆ ಹೆಚ್ಚಾಗಿ, ಆಂತರಿಕ ಕಲಹ ಅಥವಾ ನೆರೆಹೊರೆಯ ರಾಷ್ಟ್ರಗಳೊಂದಿಗೆ ಗುದ್ದಾಟಕ್ಕೆ ಕಾರಣವಾಗುತ್ತದೆ.

3. ಆರೋಗ್ಯದ ಮೇಲೆ ತೀವ್ರ ಪರಿಣಾಮ (ಹೊಟ್ಟೆಯ ಕೆಳಭಾಗ)

ದೈಹಿಕವಾಗಿ ಈ ಯುತಿಯು ‘ಕಿರು ಹೊಟ್ಟೆ’ (Lower Abdomen) ಭಾಗದ ಮೇಲೆ ನೇರ ಪ್ರಭಾವ ಬೀರುತ್ತದೆ. ಮಂಗಳನು ರಕ್ತ ಮತ್ತು ಸ್ನಾಯುಗಳಿಗೆ ಕಾರಕನಾದರೆ, ಶುಕ್ರನು ಸಂತಾನೋತ್ಪತ್ತಿ ಮತ್ತು ಮೂತ್ರ ವ್ಯವಸ್ಥೆಗೆ ಕಾರಕ.

  • ಬಾಧಿತ ಅಂಗಗಳು: ಗರ್ಭಕೋಶ, ಮೂತ್ರಕೋಶ (Urinary Bladder), ಕಿಡ್ನಿ (Kidneys).
  • ಸಂಭವನೀಯ ತೊಂದರೆಗಳು: ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು), ಮೂತ್ರನಾಳದ ಸೋಂಕು, ಮತ್ತು ಗರ್ಭಕೋಶದ ಸಮಸ್ಯೆಗಳು ಈ ಸಮಯದಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. “ಹೊಟ್ಟೆಯೊಳಗಿನ ಕಿತಾಪತಿ” ಕಾರಣಕ್ಕೆ ಶಸ್ತ್ರಚಿಕಿತ್ಸೆಯ ಅವಶ್ಯಕತೆಯೂ ಬರಬಹುದು.

4. ಮುಂದಿನ ನಾಲ್ಕೈದು ದಿನಗಳ ಎಚ್ಚರಿಕೆ

ಕುಂಭ ರಾಶಿಯಲ್ಲಿ ಇನ್ನು ಕೆಲವು ದಿನಗಳ ಕಾಲ ಈ ಯುತಿ ಮುಂದುವರಿಯಲಿದೆ. ಈ ಅವಧಿಯು ಅತ್ಯಂತ ಸೂಕ್ಷ್ಮವಾಗಿದೆ:

  • ಸಾಮಾಜಿಕ ಸಮಸ್ಯೆಗಳು: ಮಂಗಳನ ಆಕ್ರಮಣಕಾರಿ ಬುದ್ಧಿ ಮತ್ತು ಶುಕ್ರನ ಕಾಮೋದ್ರೇಕದ ಮೇಳನದಿಂದಾಗಿ ಅತ್ಯಾಚಾರದಂತಹ ಘನಘೋರ ಕೃತ್ಯಗಳು ಅಥವಾ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಬಹುದು.
  • ಮತ ಕಲಹ: ಧಾರ್ಮಿಕ ಅಸಹಿಷ್ಣುತೆ ಮತ್ತು ಮತೀಯ ಸಂಘರ್ಷಗಳು ತಲೆದೋರುವ ಸಾಧ್ಯತೆ ದಟ್ಟವಾಗಿದೆ.

ಕೇರಳೀಯ ಜ್ಯೋತಿಷ್ಯ ಪದ್ಧತಿ: ಏನಿದು ನೀಗಡ ದ್ರೇಕ್ಕಾಣದ ರಹಸ್ಯ?

ಪರಿಹಾರ ಮತ್ತು ಮುನ್ನೆಚ್ಚರಿಕೆ

ಈ ಸ್ಫೋಟಕ ಯುತಿಯ ಪ್ರಭಾವದಿಂದ ಪಾರಾಗಲು ತಾಳ್ಮೆ ಮತ್ತು ಸಂಯಮವೇ ಏಕೈಕ ಮದ್ದು.

  1. ವೈಯಕ್ತಿಕವಾಗಿ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅವಶ್ಯಕ.
  2. ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ನೀರು ಸೇವನೆ ಮತ್ತು ಹೊಟ್ಟೆಯ ಭಾಗದ ಸ್ವಚ್ಛತೆಗೆ ಆದ್ಯತೆ ನೀಡಬೇಕು.
  3. ಸಾಮಾಜಿಕವಾಗಿ ಯಾವುದೇ ಪ್ರಚೋದನಕಾರಿ ಹೇಳಿಕೆಗಳಿಗೆ ಕಿವಿಗೊಡದೆ ಶಾಂತಿ ಕಾಪಾಡುವುದು ಇಂದಿನ ಅಗತ್ಯ.

ನಿರೂಪಣೆಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts