Sri Gurubhyo Logo

ಗುರುರಾಘವೇಂದ್ರ ಸ್ವಾಮಿಗಳ 405ನೇ ಪಟ್ಟಾಭಿಷೇಕ ಮಹೋತ್ಸವ: ವೆಂಕಟನಾಥರು ರಾಘವೇಂದ್ರರಾದ ಪವಿತ್ರ ದಿನ

Sacred Brindavana of Sri Raghavendra Swamy at Mantralaya decorated with colorful flowers and traditional lamps.
ಮಂತ್ರಾಲಯದ ಮಂಚಾಲೆ ಪ್ರಭು ಶ್ರೀ ರಾಘವೇಂದ್ರ ತೀರ್ಥರ ದಿವ್ಯ ಬೃಂದಾವನದ ದರ್ಶನ. 405ನೇ ಪಟ್ಟಾಭಿಷೇಕ ಮಹೋತ್ಸವ ವಿಶೇಷ ಸಂದರ್ಭದ ಲೇಖನ.

ಇದೇ ಫೆಬ್ರವರಿ 19ನೇ ತಾರೀಕಿನಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಸನ್ಯಾಸ ಸ್ವೀಕರಿಸಿದ 405ನೇ ವರ್ಷದ ದಿವ್ಯಸ್ಮರಣೆಯ ದಿನವಾಗಿದೆ. ಕಲಿಯುಗದ ಕಲ್ಪವೃಕ್ಷ, ಕಾಮಧೇನು ಎಂದೇ ಖ್ಯಾತರಾದ ಶ್ರೀ ರಾಘವೇಂದ್ರ ತೀರ್ಥರು ಮಧ್ವ ಪರಂಪರೆಯ ಪೀಠವನ್ನು ಅಲಂಕರಿಸಿದ ಸುದಿನ. ಅಂದಹಾಗೆ, ರಾಘವೇಂದ್ರರು ಸನ್ಯಾಸ ಸ್ವೀಕರಿಸುವ ಮುನ್ನ ಆ ಮಠಕ್ಕೆ ಇದ್ಧ ಹೆಸರು ವಿಭುಧೇಂದ್ರ ತೀರ್ಥರ ಮೂಲ ಮಠ (ಕುಂಭಕೋಣಂ ಮಠ). ಆದರೆ ರಾಘವೇಂದ್ರ ಸ್ವಾಮಿಗಳು ಆ ಮಠಕ್ಕೆ ನೀಡಿದ ಕೊಡುಗೆ, ಸೆಳೆದಂಥ ಭಕ್ತರ ಪ್ರಮಾಣ ಹಾಗೂ ಇತರ ಆಧ್ಯಾತ್ಮಿಕ ಅಂಶಗಳಿಂದ ರಾಯರ ಹೆಸರೇ ಮಠಕ್ಕೆ ಆಯಿತು. 

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||

ಇತಿಹಾಸದ ಹಿನ್ನೆಲೆ

1621 ರ ಫಾಲ್ಗುಣ ಮಾಸದ ಶುದ್ಧ ಸಪ್ತಮಿಯಂದು ಶ್ರೀ ಸುಧೀಂದ್ರ ತೀರ್ಥರು ತಮ್ಮ ನೆಚ್ಚಿನ ಶಿಷ್ಯರಾದ ವೆಂಕಟನಾಥರಿಗೆ ಸನ್ಯಾಸ ದೀಕ್ಷೆ ನೀಡಿ, “ಶ್ರೀ ರಾಘವೇಂದ್ರ ತೀರ್ಥ” ಎಂದು ನಾಮಕರಣ ಮಾಡಿದರು. ಅಂದಿನಿಂದ ರಾಯರು ಸನ್ಯಾಸಾಶ್ರಮದ ಪೀಠವನ್ನೇರಿ ಧರ್ಮ ಪ್ರಸಾರ ಮತ್ತು ಭಕ್ತರ ಉದ್ಧಾರಕ್ಕೆ ಶ್ರಮಿಸಿದರು.

ಪಟ್ಟಾಭಿಷೇಕದ ಮಹತ್ವ

ರಾಯರ ಪಟ್ಟಾಭಿಷೇಕದ ದಿನವನ್ನು ಮಂತ್ರಾಲಯದಲ್ಲಿ ಮತ್ತು ವಿಶ್ವಾದ್ಯಂತ ಇರುವ ರಾಯರ ಮಠಗಳಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನದ ವಿಶೇಷತೆಗಳೆಂದರೆ:

  • ಗುರು ಸ್ಮರಣೆ: ರಾಯರು ಕೇವಲ ಮಠದ ಅಧಿಪತಿಯಾಗಲಿಲ್ಲ, ಬದಲಿಗೆ ಕೋಟ್ಯಂತರ ಭಕ್ತರ ಬಾಳಿನ ಬೆಳಕಾದರು.
  • ಪೂಜಾ ಕೈಂಕರ್ಯ: ಮಂತ್ರಾಲಯದಲ್ಲಿ ಈ ದಿನದಂದು ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ, ಕನಕಾಭಿಷೇಕ ಮತ್ತು ರಥೋತ್ಸವಗಳು ನಡೆಯುತ್ತವೆ.
  • ಜ್ಞಾನದ ಹಾದಿ: ರಾಯರು ಪೀಠಾರೋಹಣ ಮಾಡಿದ ನಂತರ ಅಸಂಖ್ಯಾತ ಗ್ರಂಥಗಳನ್ನು ರಚಿಸಿ, ತತ್ತ್ವವಾದ ಸಿದ್ಧಾಂತವನ್ನು ಜನಸಾಮಾನ್ಯರಿಗೂ ತಲುಪಿಸಿದರು.

ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 431ನೇ ವರ್ಧಂತಿ ಫೆಬ್ರವರಿ 24ಕ್ಕೆ

ಭಕ್ತರಿಗೇಕೆ ಇದು ವಿಶೇಷ?

“ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ” ಎಂದು ಪಠಿಸುವ ಭಕ್ತರಿಗೆ ಈ ದಿನ ಕೃತಜ್ಞತೆ ಸಲ್ಲಿಸುವ ಸುಸಂದರ್ಭ. ರಾಯರು ಸನ್ಯಾಸ ಸ್ವೀಕರಿಸಿದ ಈ ಕ್ಷಣವೇ ಅವರು ನಮ್ಮೆಲ್ಲರ ‘ಗುರುರಾಜ’ರಾಗಿ ಪರಿವರ್ತನೆಯಾದ ಪವಿತ್ರ ಘಳಿಗೆ.

“ರಾಯರ ಕರುಣೆ ಇದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ.”

ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನ ವಿವರ 

ವಿಷಯ ವಿವರಗಳು
ಜನನ (ಇಸವಿ) 1595
ಹುಟ್ಟಿದ ಸಂವತ್ಸರ ಮನ್ಮಥ ಸಂವತ್ಸರ
ಹುಟ್ಟಿದ ಮಾಸ / ತಿಥಿ ಫಾಲ್ಗುಣ ಮಾಸದ ಶುಕ್ಲ ಸಪ್ತಮಿ
ಪೂರ್ವಾಶ್ರಮದ ಹೆಸರು ವೆಂಕಟನಾಥ
ಪೂರ್ವಾಶ್ರಮದ ಪತ್ನಿ ಸರಸ್ವತಿ ಬಾಯಿ
ಪೂರ್ವಾಶ್ರಮದ ಪುತ್ರ ಲಕ್ಷ್ಮೀನಾರಾಯಣಾಚಾರ್ಯ
ಗೋತ್ರ ಗೌತಮ ಗೋತ್ರ
ಗುರುಗಳು ಶ್ರೀ ಸುಧೀಂದ್ರ ತೀರ್ಥರು
ಮಠದ ಮೂಲ ಹೆಸರು ಶ್ರೀ ವಿಭುಧೇಂದ್ರ ತೀರ್ಥರ ಮೂಲ ಮಠ (ಕುಂಭಕೋಣಂ ಮಠ)
ಸನ್ಯಾಸ ದೀಕ್ಷೆ 1621 (ಫಾಲ್ಗುಣ ಮಾಸದ ಶುದ್ಧ ಸಪ್ತಮಿ – ಪಟ್ಟಾಭಿಷೇಕ ದಿನ)
ಬೃಂದಾವನ ಪ್ರವೇಶ 1671 (ಶ್ರಾವಣ ಬಹುಳ ದ್ವಿತೀಯಾ)
ಬೃಂದಾವನ ಸ್ಥಳ ಮಂತ್ರಾಲಯ
ಉತ್ತರಾಧಿಕಾರಿಗಳು ಶ್ರೀ ಯೋಗೀಂದ್ರ ತೀರ್ಥರು

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts