ವೈದಿಕ ಜ್ಯೋತಿಷ್ಯದ ಪ್ರಕಾರ ಶನಿಯು ಸದ್ಯಕ್ಕೆ ಮೀನ ರಾಶಿಯಲ್ಲಿ ಸಂಚರಿಸುತ್ತಾ ಇದ್ದಾನೆ. ಶನಿಯು ‘ಮಂದ’ ಗ್ರಹವಾದ್ದರಿಂದ ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಈ ಸಂಚಾರವು ಸಾಡೇಸಾತ್ ಮತ್ತು ಶನಿ ದೃಷ್ಟಿಯ ಮೂಲಕ ಐದು ರಾಶಿಗಳ ಬದುಕಿನಲ್ಲಿ ಮಹತ್ವದ ಬದಲಾವಣೆ ತರುತ್ತಿದೆ. ಕುಂಭ, ಮೀನ ಹಾಗೂ ಮೇಷ ರಾಶಿಗೆ ಸಾಡೇಸಾತ್ ಶನಿಯ ಪ್ರಭಾವ ಇದ್ದರೆ, ಸಿಂಹ ರಾಶಿಯವರಿಗೆ ಅಷ್ಟಮ ಶನಿ ಹಾಗೂ ವೃಶ್ಚಿಕ ರಾಶಿಯವರಿಗೆ ಪಂಚಮ ಶನಿಯ ಪ್ರಭಾವ ಇರುತ್ತದೆ. ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾದರೆ, ತುಲಾ ರಾಶಿಯು ಉಚ್ಚ ಕ್ಷೇತ್ರವಾಗುತ್ತದೆ. ಇನ್ನು ಮೇಷ ರಾಶಿಯು ನೀಚಕ್ಷೇತ್ರವಾಗುತ್ತದೆ.
ರಾಶಿಗಳ ಮೇಲಿನ ಪ್ರಭಾವ ಮತ್ತು ಸ್ಥಿತಿ
ಈಗ ಶನಿ ಮೀನ ರಾಶಿಯಲ್ಲಿರುವುದರಿಂದ ಯಾವ ರಾಶಿ ಏನು ಸ್ಥಿತಿ ಎಂಬುದು ಹೀಗಿದೆ:
| ರಾಶಿ | ಶನಿಯ ಸ್ಥಿತಿ | ಪ್ರಭಾವದ ಸ್ವರೂಪ |
| ಮೀನ | ಜನ್ಮ ಶನಿ | ಸಾಡೇಸಾತಿಯ ಎರಡನೇ ಹಂತ (ಮಧ್ಯ ಭಾಗ). ಮಾನಸಿಕ ಕಿರಿಕಿರಿ, ಆರೋಗ್ಯದಲ್ಲಿ ಏರುಪೇರು. |
| ಕುಂಭ | ಪಾದ ಶನಿ | ಸಾಡೇಸಾತಿಯ ಕೊನೆಯ ಹಂತ. ಆರ್ಥಿಕ ಚೇತರಿಕೆ ಕಾಣುವ ಸಮಯವಾದರೂ ಜವಾಬ್ದಾರಿ ಹೆಚ್ಚು. |
| ಮೇಷ | ಶಿರ ಶನಿ | ಸಾಡೇಸಾತಿಯ ಮೊದಲ ಹಂತ ಆರಂಭ. ಅನಿರೀಕ್ಷಿತ ಖರ್ಚು, ವಿದೇಶ ಪ್ರಯಾಣದ ಗೊಂದಲ. |
| ಸಿಂಹ | ಅಷ್ಟಮ ಶನಿ | ಕೆಲಸದಲ್ಲಿ ಅಡೆತಡೆ, ಶತ್ರು ಬಾಧೆ, ಅತಿಯಾದ ಶ್ರಮ ಆದರೆ ಫಲ ಕಡಿಮೆ. |
| ವೃಶ್ಚಿಕ | ಪಂಚಮ ಶನಿ | ಮಾನಸಿಕ ಗೊಂದಲ, ಮಕ್ಕಳ ವಿಷಯದಲ್ಲಿ ಚಿಂತೆ, ಸ್ಥಿರಾಸ್ತಿ ವ್ಯವಹಾರದಲ್ಲಿ ಎಚ್ಚರ. |
ರಾಶಿಗಳಿಗನುಗುಣವಾಗಿ ವಿಶೇಷ ಪರಿಹಾರಗಳು
ಮೀನ ಮತ್ತು ಕುಂಭ ರಾಶಿ (ಸಾಡೇಸಾತ್ ಮಧ್ಯ ಹಾಗೂ ಅಂತ್ಯ): ನಿಮಗೆ ಜನ್ಮ ರಾಶಿಯಲ್ಲೇ ಶನಿ ಇರುವುದರಿಂದ ‘ಹನುಮದ್ಬಲ’ ಅತಿ ಮುಖ್ಯ.
- ಪರಿಹಾರ: ಪ್ರತಿ ಶನಿವಾರ ಹನುಮಂತನಿಗೆ ಸಿಂಧೂರ ಅರ್ಪಿಸಿ.
- ಶ್ಲೋಕ: “ಅಂಜನಾ ನಂದನಂ ವೀರಂ ಜಾನಕೀ ಶೋಕ ನಾಶನಂ“ ಮಂತ್ರವನ್ನು ಪಠಿಸಿ.
ಮೇಷ ರಾಶಿ (ಸಾಡೇಸಾತ್ ಆರಂಭ): ಬಾಧೆಗಳು ಆರಂಭವಾಗುವ ಹಂತವಾದ್ದರಿಂದ ‘ಶಿವನ’ ಆರಾಧನೆ ಅಗತ್ಯ.
- ಪರಿಹಾರ: ಪ್ರತಿ ಶನಿವಾರ ಶಿವನಿಗೆ ರುದ್ರಾಭಿಷೇಕ ಅಥವಾ ಎಳ್ಳುನೀರಿನ ಅಭಿಷೇಕ ಮಾಡಿಸಿ.
ಸಿಂಹ ರಾಶಿ (ಅಷ್ಟಮ ಶನಿ): ಇದು ಅತ್ಯಂತ ಎಚ್ಚರಿಕೆಯ ಕಾಲ. ಅಪಘಾತ ಮತ್ತು ವಾಗ್ವಾದಗಳಿಂದ ಎಚ್ಚರಿಕೆ ವಹಿಸಿ.
- ಪರಿಹಾರ: ಶನಿವಾರದಂದು ‘ಛಾಯಾದಾನ’ ಮಾಡಿ (ಒಂದು ಬಟ್ಟಲು ಎಣ್ಣೆಯಲ್ಲಿ ನಿಮ್ಮ ಮುಖ ನೋಡಿ ಆ ಎಣ್ಣೆಯನ್ನು ದಾನ ಮಾಡುವುದು).
ವೃಶ್ಚಿಕ ರಾಶಿ (ಪಂಚಮ ಶನಿ): ನಿರ್ಧಾರ ತೆಗೆದುಕೊಳ್ಳುವಲ್ಲಿ ಎಚ್ಚರವಿರಲಿ.
- ಪರಿಹಾರ: ಪಕ್ಷಿಗಳಿಗೆ (ವಿಶೇಷವಾಗಿ ಕಾಗೆಗಳಿಗೆ) ಆಹಾರ ನೀಡಿ. ಶನಿವಾರದಂದು ಎಳ್ಳು ಉಂಡೆಗಳನ್ನು ದಾನ ಮಾಡಿ.
Sade Sati Shani: ಸಾಡೇಸಾತ್ ಶನಿ ಎಂದರೇನು, ಈ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ 7 ಮುಂಜಾಗ್ರತೆಗಳೇನು?
ರತ್ನ ಮತ್ತು ಆಧ್ಯಾತ್ಮಿಕ ಬಲ
ಶನಿ ಮೀನ ರಾಶಿಯಲ್ಲಿ ಜಲ ತತ್ವದೊಂದಿಗೆ ಇರುವುದರಿಂದ, ಭಾವನಾತ್ಮಕ ಒತ್ತಡ ಹೆಚ್ಚಿರುತ್ತದೆ.
- ಉಪರತ್ನ: ಈ ಐದು ರಾಶಿಯವರು ‘ಅಮೆಥಿಸ್ಟ್’ (Amethyst) ಅಥವಾ ‘ಕಪ್ಪು ಹಕೀಕ್’ ಬ್ರೇಸ್ಲೆಟ್ ಧರಿಸುವುದು ಉತ್ತಮ.
- ಆಹಾರ: ಶನಿವಾರದಂದು ಉದ್ದಿನ ಬೇಳೆ ಅಥವಾ ಎಳ್ಳಿನಿಂದ ಮಾಡಿದ ಪದಾರ್ಥಗಳನ್ನು ಸೇವಿಸಿ.
ಶಾಸ್ತ್ರೋಕ್ತ ಶ್ಲೋಕಗಳ ಉಲ್ಲೇಖ
ಶನಿ ದೋಷದ ಪ್ರಭಾವ ತಗ್ಗಿಸಲು ಪುರಾಣಗಳಲ್ಲಿ ಈ ಕೆಳಗಿನ ಶ್ಲೋಕಗಳನ್ನು ಉಲ್ಲೇಖಿಸಲಾಗಿದೆ:
ಶನಿ ಸ್ತೋತ್ರ (ದಶರಥ ಕೃತ):
“ಕೋಣಸ್ಥಃ ಪಿಂಗಲೋ ಬಭ್ರುಃ ಕೃಷ್ಣೋ ರೌದ್ರೋಂತಕೋ ಯಮಃ | ಸೌರಿಃ ಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತಃ ||”
- ಅರ್ಥ: ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರಾಂತಕ, ಯಮ, ಸೌರಿ, ಶನೈಶ್ಚರ ಮತ್ತು ಮಂದ ಎಂಬ ಶನಿಯ ಹತ್ತು ನಾಮಗಳನ್ನು ಪಠಿಸುವುದರಿಂದ ಶನಿ ಬಾಧೆ ನಿವಾರಣೆಯಾಗುತ್ತದೆ.
ಶನಿ ಗಾಯತ್ರಿ ಮಂತ್ರ:
“ಓಂ ಶನೈಶ್ಚರಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹಿ ತನ್ನೋ ಮಂದಃ ಪ್ರಚೋದಯಾತ್“
ಲೇಖನ- ಶ್ರೀನಿವಾಸ ಮಠ





