Kadandale Subrahmanya Swamy Temple: ತ್ರೇತಾಯುಗದ ವಾಲಿಯಿಂದ ಪೂಜೆ ಆಗಿರುವ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ಇಲ್ಲಿದೆ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನಲ್ಲಿ ಇರುವಂಥ ಕಡಂದಲೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಚರ್ಮ ವ್ಯಾಧಿ ಇರುವವರು ಈ ದೇವರಲ್ಲಿ ಬಂದು ಬೇಡಿಕೊಂಡರೆ ನಿವಾರಣೆ ಆಗುತ್ತದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಅದೇ ರೀತಿ ಸರ್ಪ ದೋಷದಿಂದ ಆಗುವಂಥ ತೊಂದರೆಗಳಾದ ವಿವಾಹ ವಿಳಂಬ, ಸಂತಾನ ವಿಳಂಬ, ಕೆಲಸ- ಕಾರ್ಯಗಳಲ್ಲಿ ನಾನಾ ಅಡೆತಡೆಗಳು ಮೊದಲಾದ ಸಮಸ್ಯೆಗಳು ಇಲ್ಲಿನ ದೇವರಲ್ಲಿ ಬೇಡಿಕೊಂಡರೆ ನಿವಾರಣೆ ಆಗುತ್ತದೆ